Saturday 26 July 2014

ಪುಸ್ತಕ ಓದಿ ಮಸ್ತಕ ತುಂಬಿಸಿ

ವಾಚನಾವಾರ

               
              19.6.14 ವಾಚನಾವಾರದ ಉದ್ಘಾಟನೆ ಜರಗಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಓದುವಿಕೆಯ ಮಹತ್ವವನ್ನು ತಿಳಿಸಿದರು.ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ ಶುಭ ಹಾರೈಸಿದರು. ಹೊಸ ಪುಸ್ತಕಗಳ ಬಿಡುಗಡೆ ಹಾಗೂ ಪ್ರದರ್ಶನ ಈ ಸಂದರ್ಭದಲ್ಲಿ ಜರಗಿತು. 20.6.14 ರಂದು ಪ್ರತಿ ತರಗತಿಯಲ್ಲೊ ಮಕ್ಕಳಿಗೆ ಕತೆ ಪುಸ್ತಕವನ್ನು ವಿತರಿಸಲಾಯಿತು. 23.6.14 ರಂದು 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಏರ್ಪಡಿಸಲಾಯಿತು. 24.6.14ರಂದು ತರಗತಿಗಳಲ್ಲಿ ಪುಸ್ತಕ ಸಂಗ್ರಹ ಹಾಗೂ ಮಕ್ಕಳು ಓದಿದ ಕತೆಯ ಸಾರಾಂಶವನ್ನು ಹೇಳುವ ಕಾರ್ಯಕ್ರಮ ಜರಗಿತು. 25.6.14 ರಂದು 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳು ಮಂಜೇಶ್ವರ ಗೋವಿಂದ ಪೈ ಗ್ರಂಥಾಲಯಕ್ಕೆ ಭೇಟಿ ನೀಡಿದರು. 26.6.14.ರಂದು ಸಮಾರೋಪ ಕಾರ್ಯಕ್ರಮ ಜರಗಿತು. ರಸ ಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಓದಿನ ಮಹತ್ವವನ್ನು ತಿಳಿಸಿ ಹುಟ್ಟು ಹಬ್ಬದ ದಿನ ಒಂದು ಪುಸ್ತಕವನ್ನು ಶಾಲೆಗೆ ನೀಡಬೇಕೆಂದು ಮುಖ್ಯೋಪಾಧ್ಯಾಯರು ಸೂಚಿಸಿದರು.

                   

No comments:

Post a Comment

ಗಣರಾಜ್ಯೋತ್ಸವ