Saturday 26 July 2014

ಬಲಿಷ್ಟ ಸಂಘಟನೆಗಳ ರೂಪೀಕರಣ


ರಕ್ಷಕ - ಶಿಕ್ಷಕ ಮಹಾ ಸಭೆ

       
               5.7.14 ಶನಿವಾರ ರಕ್ಷಕ - ಶಿಕ್ಷಕ ಮಹಾ ಸಭೆ ಜರಗಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಲಿಲ್ಲಿ ಬಾಯಿ ಟೀಚರ್ ಉಪಸ್ಥಿತರಿದ್ದರು.ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನಸೂಯ ಟೀಚರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ 2013-14 ನೇ ಸಾಲಿನ ವರದಿಯನ್ನು ವಾಚಿಸಿ, ಲೆಕ್ಕ ಪತ್ರವನ್ನು ಮಂಡಿಸಿದರು. ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರಲಿಲ್ಲಿ ಬಾಯಿ ಟೀಚರ್ ಹೆತ್ತವರಿಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ 2014- 15 ನೇ ಸಾಲಿನ ಪಿ.ಟಿ. , ಎ೦.ಪಿ.ಟಿ.. ಹಾಗೂ ಗಂಜಿ ಸಮಿತಿಯನ್ನು ಆರಿಸಲಾಯಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಯುತ ಪುತ್ತಬ್ಬ ಕುಂಜತ್ತೂರು ಪುನರಾಯ್ಕೆ ಯಾದರು. ಹೊಸತಾಗಿ ಆಯ್ಕೆಯಾದ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು

No comments:

Post a Comment

ಗಣರಾಜ್ಯೋತ್ಸವ