Saturday 5 September 2015

ಶಿಕ್ಷಕರ ದಿನಾಚರಣೆ



          05-09-2015 ಶಿಕ್ಷಕ ದಿನದ ಅಂಗವಾಗಿ ದಿನಾಂಕ 04-09-2015 ಶುಕ್ರವಾರದಂದು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ಮೊದಲಿಗೆ ಮಕ್ಕಳು ಅಧ್ಯಾಪಕರಿಗೆ ಹೂ ನೀಡಿ ವಂದನೆ ಸಲ್ಲಿಸಿದರು. ಅಧ್ಯಾಪಕರಿಗೆ ಹಗ್ಗಜಗ್ಗಾಟ ಮತ್ತು ಅಧ್ಯಾಪಿಕೆಯರಿಗೆ ಬಾಂಬ್ ಇಂದ ಸಿಟಿ ಆಟವನ್ನು ಏರ್ಪಡಿಸಲಾಗಿತ್ತು. ನಂತರ ಸಭಾಕಾರ್ಯಕ್ರಮ ನಡೆಯಿತು. ಸುದತಿ ಟೀಚರ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಪೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಕೃಷ್ಣ ಕುಮಾರಿ ಟೀಚರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪ್ರಿಪ್ರೈಮರಿ ನಿವೃತ್ತ ಶಿಕ್ಷಕಿಯಾದಂತಹ ವತ್ಸಲಾ ಟೀಚರ್, ಎಲ್.ಪಿ. ನಿವೃತ್ತ ಮುಖೋಪಾಧ್ಯಾಯಿನಿ ಸುಮತಿಭಾಯಿ ಟೀಚರ್ ಮತ್ತು ನಿವೃತ್ತ ಪೌಢಶಾಲಾ ಮುಖೋಪಾಧ್ಯಾಯರಾದಂತಹ ಶ್ರೀಧರ್ ಭಟ್ ಅವರನ್ನು ಸನ್ಮಾನಿಸಲಾಯಿತು. ಲಿಲ್ಲಿಭಾಯಿ ಟೀಚರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುರಳಿ ಸರ್ ಧನ್ಯವಾದ ಸಮರ್ಪಿಸಿದರು.

ಗಣರಾಜ್ಯೋತ್ಸವ