Friday, 20 November 2015
ಮಂಜೇಶ್ವರ ಉಪಜಿಲ್ಲಾ ಮಟ್ಟದ ಮೇಳ
ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ಗಣಿತ ಮೇಳದ ಪಝಲ್ ವಿಭಾಗದಲ್ಲಿ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ಪ್ರಣಮ್ಯ, ಸಮಾಜ ವಿಜ್ಞಾನ ಮೇಳದ ಚಾರ್ಟ್ ವಿಭಾಗದಲ್ಲಿ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ಲವನೀಶ್ ಮತ್ತು ವಚನ ಹಾಗೂ ವೃತ್ತಿ ಪರಿಚಯ ಮೇಳದ ಅಗರ್ ಬತ್ತಿ ತಯಾರಿ ವಿಭಾಗದಲ್ಲಿ ಭಾಗವಹಿಸಿದ ಅಶ್ ಫಾನ ಮೊದಲಾದವರು ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು.
Saturday, 14 November 2015
ಮಕ್ಕಳ ದಿನಾಚರಣೆ ಮತ್ತು ಸನ್ಮಾನ ಸಮಾರಂಭ
14-11-2015 ರಂದು ಮಕ್ಕಳ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಿಗೆ
ಬಹುಮಾನ ವಿತರಣೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳಗ್ಗೆ 10
ಗಂಟೆಗೆ ಸರಿಯಾಗಿ ಸಭಾಕಾರ್ಯಕ್ರಮವು ಆರಂಭವಾಯಿತು.
ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಮಂಜೇಶ್ವರ
ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಗಳಾದ ನಂದಿಕೇಶನ್ ಮತ್ತು ಶಾಲಾ ಪ್ರಬಂಧಕರಾದ ಎಂ. ದಿನೇಶ್ ಶೆಣೈ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ದಿನಾಚರಣೆಯ ಶುಭ ಸಂದೇಶವನ್ನು ನೀಡಿದರು. ಮಾಜಿ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು, ಶಾಲೆಯಲ್ಲಿ ಮೊದಲು ಗಂಜಿ ಬೇಯಿಸುತ್ತಿದ್ದ ರತ್ನಮ್ಮ ಅವರಿಗೆ ಶಾಲು ಹೊದಿಸಿ,
ಫಲಪುಷ್ಪ, ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ನಿತೀನ್ ಚಂದ್ರ ಪೈ ಅವರಿಗೆ
ಕಾಣಿಕೆಯನ್ನು ನೀಡಿ ಆದರಿಸಲಾಯಿತು. ಶಾಲಾಮಟ್ಟದಲ್ಲಿ ನಡೆದ ಆಟೋಟ ಸ್ಪರ್ಧೆ ಮತ್ತು
ಕಲೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮತ್ತು ವಿಜ್ಞಾನ
ಮೇಳದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ
ಮನೋರಮಾ ಟೀಚರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೂತನ ವಾರ್ಡ್ ಸದಸ್ಯೆಯಾದ ಸುಪ್ರೀಯಾ ಶೆಣೈ,
ನೆರೆಯ ವಾರ್ಡ್ ಸದಸ್ಯರಾದ ಅಬ್ದುಲ್ಲ ಗುಡ್ಡೆಕೇರಿ,
ಪಿ.ಟಿ.ಎ. ಅಧ್ಯಕ್ಷರಾದ ಫರೀದ್ ಎಂ.ಪಿ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ತೇಜೇಶ್ ಕಿರಣ್ ರವರು ಜವಹರಲಾಲ್ ನೆಹರುವಿನ ಕುರಿತಾಗಿ
ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದಿ.ವಿಟ್ಟಪ್ಪ ಶೆಣೈ ಮತ್ತು ನಿವೃತ್ತ ಶಿಕ್ಷಕಿ ಚಂದ್ರಕಲಾ
ಭಾಯಿ ಇವರು ಕೊಡಮಾಡಿದ ನಗದು ಬಹುಮಾನವನ್ನು ವಿತರಿಸಲಾಯಿತು. ಕೊನೆಗೆ ಎಲ್ಲರಿಗೂ ಸಿಹಿತಿಂಡಿ
ಹಂಚಲಾಯಿತು. ಅನುಸೂಯ ಟೀಚರ್ ಧನ್ಯವಾದವಿತ್ತರು. ಅಧ್ಯಾಪಕ ಶ್ರೀಕೃಷ್ಣ ಡಿ.ಕೆ. ಕಾರ್ಯಕ್ರಮವನ್ನು
ನಿರೂಪಿಸಿದರು.
Thursday, 5 November 2015
ಶಾಲಾ ಮಟ್ಟದ ಕಲೋತ್ಸವ
29-10-2015
ಮತ್ತು 30-10-2015 ರಂದು ಶಾಲಾಮಟ್ಟದ ಕಲೋತ್ಸವ ಜರಗಿತು.29 ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ
ಮನೋರಮಾ ಟೀಚರ್ ಉದ್ಘಾಟಿಸಿದರು. ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶುಭ
ಹಾರೈಸಿದರು. ಪಿ.ಟಿ.ಎ. ಉಪಾಧ್ಯಕ್ಷರಾದ ನವೀನ್ ಅಡಪ ಉಪಸ್ಥಿತರಿದ್ದರು. ನಂತರ ಮಕ್ಕಳ ಕಂಠಪಾಠ,
ಲಘುಸಂಗೀತ, ಕಥೆ ಹೇಳುವುದು, ಮಾಪಿಳ್ಲಪಾಟು, ಗುಂಪು ಸಂಗೀತ, ದೇಶಭಕ್ತಿಗೀತೆ ಸ್ಪರ್ಧೆಗಳು ಜರಗುದವು.
ಮರುದಿನ ನೃತ್ಯ ಸ್ಪರ್ಧೆಗಳು ಜರಗಿದವು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ
ಭಾಗವಹಿಸಿದರು. ಮಕ್ಕಳು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಿದ್ದು ಕಲೋತ್ಸವಕ್ಕೆ ಹೆಚ್ಚಿನ ಮೆರುಗು
ನೀಡಿತು.
ಶಾಲಾ ಮಟ್ಟದ ಕ್ರೀಡೋತ್ಸವ
27-10-2015 ರಂದು ಶಾಲಾ ಮಟ್ಟದ ಕ್ರೀಡಾಕೂಟ ಜರಗಿತು. ಅಧ್ಯಾಪಕರಾದ ಮಹೇಶ ಕೆ. ಅವರು ಕ್ರೀಡಾಕೂಟದ ಜವಾಬ್ದಾರಿ ವಹಿಸಿದ್ದರು. ಹೆಚ್ಚಿನ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಶಾಲಾ ಮಟ್ಟದಲ್ಲಿ ವಿಜೇತರಾದವರನ್ನು ಉಪಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. 100ಮೀ, 50ಮೀ ಓಟ, ದೂರ ಜಿಗಿಯತ, ಸ್ಟೇಂಡಿಂಗ್ ಬೋಡ್ ಜಂಪ್ ಇತ್ಯಾದಿ ಸ್ಪರ್ಧೆಗಳು ಜರಗಿದವು.
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...