ಎಸ್.ಎ.ಟಿ. ಶಾಲೆಯ ಆಡಳಿತ ಮಂಡಳಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಹಾಗೂ ಶಾಲಾ ಪರಿಸರ ಸಂಘದ ಜಂಟಿ ಆಶ್ರಯದಲ್ಲಿ ಸಾಮೂಹಿಕ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮ 12-07-2015 ರಂದು ಜರಗಿತು. ಸಭಾಧ್ಯಕ್ಷತೆಯನ್ನು ಮಂಗಳೂರಿನ ಟಿ. ಗಣಪತಿ ಪೈ ವಹಿಸಿ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಮದ್ ಅನಂತೇಶ್ವರ ದೇವಳದ ಅಧ್ಯಕ್ಷ ಡಾ. ಕೆ.ಅನಂತ ಕಾಮತ್, ಎಂ. ವಿಠಲದಾಸ್ ಭಟ್, ಮನೋರಮ ಕಿಣಿ, ಲಿಲ್ಲಿ ಟೀಚರ್, ಪುತ್ತಬ್ಬ ಮೊದಲಾದವರು ಉಪಸ್ಥಿತರಿದ್ದರು. ಕೆ. ಗುರುದತ್ತ ಕಾಮತ್ ಸ್ವಾಗತಿಸಿ ಪ್ರಬಂಧಕರಾದ ದಿನೇಶ್ ಶೆಣೈ ವಂದಿಸಿದರು. ವೀರೇಶ್ವರ ಭಟ್ ನಿರೂಪಿಸಿದರು. ಊರ ಪರವೂರ ಅಭಿಮಾನಿಗಳು, ಮಕ್ಕಳು ಗಿಡಗಳನ್ನು ನೆಟ್ಟು ಸಂರಕ್ಷಿಸುವ ಪಣತೊಟ್ಟರು.
No comments:
Post a Comment