Monday 15 September 2014

ಸಾಕ್ಷರ 2014 ಶಿಬಿರದ ಉದ್ಘಾಟನೆ




                  ಸಾಕ್ಷರ – 2014 ಇದರ ಅಂಗವಾಗಿ ಡಯಟ್ ಕಾಸರಗೋಡು ಇದರ ನಿರ್ದೇಶನದಂತೆ ಶಿಬಿರ ವನ್ನು  ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ಅನಂತ ವಿದ್ಯಾ ಸಭಾಂಗಣದಲ್ಲಿ  ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಮುಶ್ರತ್ ಜಹಾನ್ ಶಿಬಿರವನ್ನು ಉದ್ಘಾಟಿಸಿದರು. ಬಿ.ಆರ್.ಸಿ ತರಬೇತುದಾರರಾದ ವಿಜಯ ಕುಮಾರ್ ಶಿಬಿರದ ಉದ್ದೇಶವನ್ನು ವಿವರಿಸಿದರು. ಶಾಲಾ ಪ್ರಬಂಧಕರಾದ ಎಂ. ದಿನೇಶ್ ಶೆಣೈ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭಕೋರಿದರು. ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ , ಪ್ರೌಢ ಶಾಲಾ ವಿಭಾಗದ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷೆ  ಹೇಮಲತ , ಕಿರಿಯ ಪ್ರಾಥಮಿಕ  ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು,  ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ , ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಪುಂಡಲಿಕ ನಾಯಕ್ ಸ್ವಾಗತಿಸಿ , ಶಿಕ್ಷಕ ಕೃಷ್ಣ ಭಟ್ ಡಿ. ಕೆ ಧನ್ಯವಾದ ಸಮರ್ಪಿಸಿದರು. ಎಸ್ .ಆರ್. ಜಿ. ಸಂಚಾಲಕರಾದ ಶಾಂತರಾಮ ಎಸ್   ಕಾರ್ಯಕ್ರಮವನ್ನು  ನಿರೂಪಿಸಿದರು. ಶಿಬಿರದಲ್ಲಿ  ಶಿಕ್ಷಕರಾದ  ಶೈಲಜ ಎಂ., ಕಿರಣ್ ಕುಮಾರ್, ತೇಜಸ್ ಕಿರಣ್, ದಾಸಪ್ಪ ರೈ , ನಾಗೇಶ್ ವಿ ,ಗಣೇಶ್ ನಾಯಕ್. ಲಕ್ಷ್ಣಿದಾಸ್ ಪ್ರಭು, ಸುಮತಿ.ಎಂ . ಸರ್ವೇಶ್ವರಿ, ಪದ್ಮಿನಿ, ಅನಸೂಯ ಮುಂತಾದವರು ಶಿಬಿರವನ್ನು ನಡೆಸಿಕೊಟ್ಟರು

No comments:

Post a Comment

ಗಣರಾಜ್ಯೋತ್ಸವ