Thursday, 28 August 2014
Friday, 22 August 2014
Thursday, 21 August 2014
Tuesday, 19 August 2014
Sunday, 17 August 2014
ಸಂಭ್ರಮದ 68ನೇ ಸ್ವಾತಂತ್ರ್ಯೋತ್ಸವ
ಎಸ್.ಎ.ಟಿ ವಿದ್ಯಾಲಯದಲ್ಲಿ 68ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಪ್ರಬಂಧಕರಾದ ಶ್ರೀ ದಿನೇಶ್ ಶೆಣೈ.ಎ೦ ಧ್ವಜಾರೋಹಣಗೈದು ಶುಭ ಸಂದೇಶಗಳನ್ನು ನೀಡಿದರು. ವಾರ್ಡ್ ಸದಸ್ಯರಾದ ಶ್ರೀ ಆನಂದ ಮಾಸ್ತರ್ ಶುಭ ಕೋರಿದರು. ಹೈಸ್ಕೂಲ್ ವಿಭಾಗದ ಪಿ.ಟಿ.ಎ ಉಪಾಧ್ಯಕ್ಷೆ ಶ್ರೀಮತಿ ಹೆಮಲತಾ, ಎಲ್.ಪಿ ವಿಭಾಗದ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಪುತ್ತಬ್ಬ ಕುಂಜತ್ತೂರು, ಮದರ್ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಶಾರದ, ಮುಖ್ಯೋಪಾಧ್ಯಾಯಿನಿಯವರುಗಳಾದ ಶ್ರೀಮತಿ ಮನೋರಮಾ ಕಿಣಿ, ಶ್ರೀಮತಿ ಸುದತಿ.ಬಿ, ಸಲಹಾ ಸಮಿತಿ ಸದಸ್ಯೆ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನೃತ್ಯ, ಸ್ಥಬ್ದ ಚಿತ್ರ ಪ್ರದರ್ಶನ, ದೇಶ ಭಕ್ತಿಗೀತೆ, ಛದ್ಮವೇಶ, ಸ್ಕೌಟ್-ಗೈಡ್ ದಳದ ಕವಾಯತುಗಳನ್ನು ನಡೆಸಲಾಯಿತು. ಹೆಚ್ಚಿನ ಮಕ್ಕಳು, ಸಿಬ್ಬಂದಿವರ್ಗದವರು, ಮಕ್ಕಳ ರಕ್ಷಕರು , ಶಾಲಾಭಿಮಾನಿಗಳು ಉಪಸ್ಥಿತರಿದ್ದರು. 2013-14ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಸಂಪಾದಿಸಿದ ಪ್ರತಿಭಾನ್ವಿತರಿಗೆ ನಗದು ಪುರಸ್ಕಾರವನ್ನೂ, ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಾಲಾ ಸಮಾಜ ಶಾಸ್ತ್ರದ ಕ್ಲಬ್ಬಿನ ಕನ್ವೀನರ್ ಶ್ರೀಮತಿ ಮೋಹಿನಿ ಟೀಚರ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ಪುಂಡಲೀಕ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ವಂದನಾರ್ಪಣೆಗೈದರು. ತದನಂತರ ಉದಾರ ದಾನಿಯೂ , ಜೋತಿಷ್ಯರಾದ ಶ್ರೀ ಛತ್ರಪತಿ ಪ್ರಭು ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಿದರು.
Friday, 15 August 2014
Tuesday, 12 August 2014
Friday, 8 August 2014
ಶಾಂತಿ ಸಹಬಾಳ್ವೆಯಿಂದ ಸುಂದರ ಭವಿಷ್ಯ
ಯುದ್ಧ ವಿರೋಧಿ ದಿನಾಚರಣೆ
6. 8.2014 ಹಿರೋಶಿಮ ದಿನ ಮತ್ತು 9.8.2014 ನಾಗಸಾಕಿ ದಿನದ ಅಂಗವಾಗಿ 8.8.2014 ರಂದು ಯುದ್ಧ ವಿರೋಧಿ ದಿನವನ್ನು ಆಚರಿಸಲಾಯಿತು. ಯುದ್ಧದಿಂದ ಉಂಟಾಗುವ ನಾಶ ನಷ್ಟಗಳ ಕುರಿತಾಗಿ ವಿವರಿಸಿ ಹೇಳಲಾಯಿತು. ಪ್ರತಿಯೊಬ್ಬರು ಶಾಂತಿಯನ್ನು ಪಾಲಿಸಬೇಕಾದ ಅಗತ್ಯತೆಯನ್ನು ತಿಳಿಹೇಳಲಾಯಿತು. ಯುದ್ಧದ ಭೀಕರತೆ, ದುಷ್ಪರಿಣಾಮಗಳನೊಳ್ಳಗೊಂಡ ವಿಡಿಯೋವನ್ನು ಮೂಲಕ ಪ್ರದರ್ಶಿಸಲಾಯಿತು.
Thursday, 7 August 2014
ಮುನ್ನಡೆಯತ್ತ ಕಲಿಕೆ......
ಸಾಕ್ಷರ 2014 ಪ್ರಾರಂಭ
ಎಸ್.
ಎ. ಟಿ.
ಎಲ್. ಪಿ.
ವಿದ್ಯಾಲಯದಲ್ಲಿ
ಸಾಕ್ಷರ 2014 ಕಾರ್ಯಕ್ರಮದ
ಉದ್ಘಾಟನೆಯು ಅನಂತ ವಿದ್ಯಾ
ಸಭಾಂಗಣದಲ್ಲಿ ವಾರ್ಡ್ ಸದಸ್ಯರಾದ
ಆನಂದ ಮಾಸ್ತರ್ ರವರಿಂದ ನೇರವೇರಿತು.
ಪ್ರೌಢ ಶಾಲಾ
ರಕ್ಷಕ- ಶಿಕ್ಷಕ
ಸಂಘದ ಅಧ್ಯಕ್ಷರಾದ ನಿತಿನ್
ಚಂದ್ರ ಪೈ ಅಧ್ಯಕ್ಷತೆಯನ್ನು
ವಹಿಸಿ ಶುಭಕೋರಿದರು. ಬಿ.ಆರ್.ಸಿ. ತರಬೇತುದಾರರಾದ ರಮ್ಯ ಟೀಚರ್
ಪ್ರಾಸ್ತಾವಿಕವಾಗಿ ನುಡಿದರು.
ಶಾಲಾಮಟ್ಟದಲ್ಲಿ
ಸದ್ರಿಯೋಜನೆಯನ್ನು ಕಾರ್ಯಗತಗೊಳಿಸುವ
ಮಾಹಿತಿಯನ್ನು ಪ್ರೌಢ ಶಾಲಾ
ಮುಖ್ಯೋಪಾದ್ಯಾಯಿನಿ ಮನೋರಮ ಕಿಣಿ
ಒದಗಿಸಿದರು. ಕಿರಿಯ
ಪ್ರಾಥಮಿಕ ಶಾಲೆಯಲ್ಲಿ ಈ ಯೋಜನೆಯನ್ನು
ಕಾರ್ಯಗತಗೊಳಿಸುವ ಮಾಹಿತಿಯನ್ನು
ಕಿರಿಯ ಪ್ರಾಥಮಿಕ ಮುಖ್ಯೋಪಾದ್ಯಾಯಿನಿ
ಸುದತಿ. ಬಿ.
ವಿವರನೀಡಿದರು.
ಸಭೆಯಲ್ಲಿ
ನರ್ಸರಿ ಮುಖ್ಯಸ್ಥೆ ಲಿಲ್ಲಿ
ಬಾಯಿ , ಪ್ರೌಢ
ಶಾಲಾ ರಕ್ಷಕ- ಶಿಕ್ಷಕ
ಸಂಘದ ಉಪಾಧ್ಯಕ್ಷರಾದ ಹೇಮಲತ ,
ಕಿರಿಯ ಪ್ರಾಥಮಿಕ
ರಕ್ಷಕ- ಶಿಕ್ಷಕ
ಸಂಘದ ಅಧ್ಯಕ್ಷರಾದ ಪುತ್ತಬ್ಬ
ಕುಂಜತ್ತೂರು ಹಾಗೂ ಮಕ್ಕಳ ರಕ್ಷಕರು
ಉಪಸ್ಥಿತರಿದ್ದರು. ಹಿರಿಯ
ಅಧ್ಯಾಪಕರಾದ ಪುಂಡಲೀಕ್ ನಾಯಕ್
ಸ್ವಾಗತಿಸಿ ವಂದಿಸಿದರು.
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...