ಸಾಕ್ಷರ 2014 ಪ್ರಾರಂಭ
ಎಸ್.
ಎ. ಟಿ.
ಎಲ್. ಪಿ.
ವಿದ್ಯಾಲಯದಲ್ಲಿ
ಸಾಕ್ಷರ 2014 ಕಾರ್ಯಕ್ರಮದ
ಉದ್ಘಾಟನೆಯು ಅನಂತ ವಿದ್ಯಾ
ಸಭಾಂಗಣದಲ್ಲಿ ವಾರ್ಡ್ ಸದಸ್ಯರಾದ
ಆನಂದ ಮಾಸ್ತರ್ ರವರಿಂದ ನೇರವೇರಿತು.
ಪ್ರೌಢ ಶಾಲಾ
ರಕ್ಷಕ- ಶಿಕ್ಷಕ
ಸಂಘದ ಅಧ್ಯಕ್ಷರಾದ ನಿತಿನ್
ಚಂದ್ರ ಪೈ ಅಧ್ಯಕ್ಷತೆಯನ್ನು
ವಹಿಸಿ ಶುಭಕೋರಿದರು. ಬಿ.ಆರ್.ಸಿ. ತರಬೇತುದಾರರಾದ ರಮ್ಯ ಟೀಚರ್
ಪ್ರಾಸ್ತಾವಿಕವಾಗಿ ನುಡಿದರು.
ಶಾಲಾಮಟ್ಟದಲ್ಲಿ
ಸದ್ರಿಯೋಜನೆಯನ್ನು ಕಾರ್ಯಗತಗೊಳಿಸುವ
ಮಾಹಿತಿಯನ್ನು ಪ್ರೌಢ ಶಾಲಾ
ಮುಖ್ಯೋಪಾದ್ಯಾಯಿನಿ ಮನೋರಮ ಕಿಣಿ
ಒದಗಿಸಿದರು. ಕಿರಿಯ
ಪ್ರಾಥಮಿಕ ಶಾಲೆಯಲ್ಲಿ ಈ ಯೋಜನೆಯನ್ನು
ಕಾರ್ಯಗತಗೊಳಿಸುವ ಮಾಹಿತಿಯನ್ನು
ಕಿರಿಯ ಪ್ರಾಥಮಿಕ ಮುಖ್ಯೋಪಾದ್ಯಾಯಿನಿ
ಸುದತಿ. ಬಿ.
ವಿವರನೀಡಿದರು.
ಸಭೆಯಲ್ಲಿ
ನರ್ಸರಿ ಮುಖ್ಯಸ್ಥೆ ಲಿಲ್ಲಿ
ಬಾಯಿ , ಪ್ರೌಢ
ಶಾಲಾ ರಕ್ಷಕ- ಶಿಕ್ಷಕ
ಸಂಘದ ಉಪಾಧ್ಯಕ್ಷರಾದ ಹೇಮಲತ ,
ಕಿರಿಯ ಪ್ರಾಥಮಿಕ
ರಕ್ಷಕ- ಶಿಕ್ಷಕ
ಸಂಘದ ಅಧ್ಯಕ್ಷರಾದ ಪುತ್ತಬ್ಬ
ಕುಂಜತ್ತೂರು ಹಾಗೂ ಮಕ್ಕಳ ರಕ್ಷಕರು
ಉಪಸ್ಥಿತರಿದ್ದರು. ಹಿರಿಯ
ಅಧ್ಯಾಪಕರಾದ ಪುಂಡಲೀಕ್ ನಾಯಕ್
ಸ್ವಾಗತಿಸಿ ವಂದಿಸಿದರು.
No comments:
Post a Comment