ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಅಂಗವಾಗಿ
ಮಕ್ಕಳಲ್ಲಿ ಕಲೆ, ಸಾಹಿತ್ಯಗಳಲ್ಲಿ ಆಸಕ್ತಿಯನ್ನು ಬೆಳೆಸಲು
ತರಗತಿಗಳಲ್ಲಿ ಕಥೆ, ಕವಿತೆ, ಬಾಯಿತಾಳ, ಒಗಟು, ಚಿತ್ರ ರಚನೆ ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು. ಈ ಚಟುವಟಿಕೆಗಳ
ಉದ್ಘಾಟನೆಯನ್ನು ದಿನಾಂಕ 11-01-2016 ರಂದು ಅಸೆಂಬ್ಲಿಯಲ್ಲಿ ನಡೆಸಲಾಯಿತು.
ಪಿ.ಟಿ.ಎ. ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹೇಶ್ ಸರ್ ಮತ್ತು ಸುದತಿ ಟೀಚರ್ ಬಾಯಿ
ತಾಳ ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುದತಿ ಟೀಚರ್ ತರಗತಿಗಳಲ್ಲಿ
ನಡೆಸಲ್ಪಡುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
Thursday, 14 January 2016
ವಿಧ್ಯಾರಂಗ ಕಲಾಸಾಹಿತ್ಯ ವೇದಿಕೆ
Thursday, 3 December 2015
ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ
ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ
ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು ಎಲ್.ಪಿ. ಸಾಮಾನ್ಯ ವಿಭಾಗದ ಗುಂಪು ಸಂಗೀತ
ಸ್ಪರ್ಧೆಯಲ್ಲಿ ಭಾಗವಹಿಸಿ 'ಎ' ಗ್ರೇಡನ್ನು, ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ
ಭಾಗವಹಿಸಿ 'ಎ' ಗ್ರೇಡಿನೊಂದಿಗೆ ದ್ವಿತೀಯ
ಸ್ಥಾನವನ್ನು, ಜಲವರ್ಣ
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಜೀನ ಬಿ. 'ಬಿ'ಗ್ರೇಡಿನೊಂದಿಗೆ ನಾಲ್ಕನೆಯ
ಸ್ಥಾನವನ್ನು, ಜಾನಪದ
ನೃತ್ಯ ಸ್ಪರ್ಧೆಯಲ್ಲಿ
ಭಾಗವಹಿಸಿದ ಪಾಯಲ್ ಎಮ್.ಪಿ. 'ಎ' ಗ್ರೇಡಿನೊಂದಿಗೆ ದ್ವಿತೀಯ
ಸ್ಥಾನವನ್ನು, ಭರತನಾಟ್ಯ
ಸ್ಪರ್ಧೆಯಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು, ಮಾಪಿಳ್ಳಪಾಟ್ ಸ್ಪರ್ಧೆಯಲ್ಲಿ
ಭಾಗವಹಿಸಿದ ಅಶ್ ಫಾನ 'ಬಿ' ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು, ಕನ್ನಡ ವಿಭಾಗದ ಕಥೆ ಹೇಳುವ
ಸ್ಪರ್ಧೆಯಲ್ಲಿ ಭಾಗವಹಿಸಿದ ಭವಿಶ್ 'ಬಿ' ಗ್ರೇಡನ್ನು ಪಡೆಯುವುದರೊಂದಿಗೆ
ಎಲ್.ಪಿ.ಕನ್ನಡ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
Friday, 20 November 2015
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...