S A T L S MANJESHWARA
WELCOME TO Shreemad Anantheshwara Temple School Manjeshwara
Pages
HOME
ಶಾಲಾ ಸಂಪನ್ಮೂಲ
ಚಟುವಟಿಕಾ ಕ್ಯಾಲೆಂಡರ್
ವಿದ್ಯಾರ್ಥಿ ಮೂಲೆ
ತರಗತಿ ಕೋಣೆ
ಪತ್ರಿಕಾ ವರದಿ
ಶಾಲಾ ಇತಿಹಾಸ
ವಿದ್ಯಾರ್ಥಿಗಳ ಸಂಖ್ಯೆ
ಹೇಳಿಕೆ
Sunday, 31 January 2016
ಮೆಟ್ರಿಕ್ ಶಿಬಿರ
Thursday, 14 January 2016
ವಿಧ್ಯಾರಂಗ ಕಲಾಸಾಹಿತ್ಯ ವೇದಿಕೆ
ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಅಂಗವಾಗಿ ಮಕ್ಕಳಲ್ಲಿ ಕಲೆ
,
ಸಾಹಿತ್ಯಗಳಲ್ಲಿ ಆಸಕ್ತಿಯನ್ನು ಬೆಳೆಸಲು ತರಗತಿಗಳಲ್ಲಿ ಕಥೆ
,
ಕವಿತೆ
,
ಬಾಯಿತಾಳ
,
ಒಗಟು
,
ಚಿತ್ರ ರಚನೆ ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು. ಈ ಚಟುವಟಿಕೆಗಳ ಉದ್ಘಾಟನೆಯನ್ನು ದಿನಾಂಕ
11-01-2016
ರಂದು ಅಸೆಂಬ್ಲಿಯಲ್ಲಿ ನಡೆಸಲಾಯಿತು. ಪಿ.ಟಿ.ಎ. ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹೇಶ್ ಸರ್ ಮತ್ತು ಸುದತಿ ಟೀಚರ್ ಬಾಯಿ ತಾಳ ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುದತಿ ಟೀಚರ್ ತರಗತಿಗಳಲ್ಲಿ ನಡೆಸಲ್ಪಡುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ದಿನಾಂಕ
13-01-2015
ರಂದು ಮಕ್ಕಳ ಸೃಜನಾತ್ಮಕ ರಚನೆಗಳ ಪ್ರದರ್ಶನ ಮತ್ತು ಸಮಾರೋಪ ಕಾರ್ಯಕ್ರಮ ಜರಗಿತು. ನಿವೃತ್ತ ಪ್ರಾಂಶುಪಾಲರಾದ ಶೇಣಿ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಯ್ದ ಮಕ್ಕಳ ಸೃಜನಾತ್ಮಕ ರಚನೆಗಳ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಡ್ ಸದಸ್ಯರ ಸುಪ್ರೀಯಾ ಶೆಣೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಿ.ಟಿ.ಎ. ಅಧ್ಯಕ್ಷರಾದ ಫರೀದ್ ಎಂ.ಪಿ. ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮುಖ್ಯ ಅತಿಥಿಗಳು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಕಥೆ ಮತ್ತು ಕವಿತೆ ರಚಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಗಳನ್ನು ನೀಡಿದರು. ಅನಂತರ ಆಯ್ದ ಮಕ್ಕಳ ಸೃಜನಾತ್ಮಕ ರಚನೆಗಳ ಮಂಡನೆ ನಡೆಯಿತು. ಪಿ.ಯಿ.ಸಿ. ಮಟ್ಟದಲ್ಲಿ ನಡೆಯುವ ಸಾಹಿತ್ಯೋತ್ಸವಕ್ಜೆ ಆರಿಸಿದ ಮಕ್ಕಳ ಹೆಸರುಗಳನ್ನು ಘೋಷಿಸಲಾಯಿತು. ಅನುಸೂಯ ಟೀಚರ್ ಸ್ವಾಗತಿಸಿ ತೇಜೇಶ್ ಕಿರಣ್ ಸರ್ ವಂದಿಸಿದರು. ಶ್ರೀಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ದಿನಾಂಕ
16-01-2016
ರಂದು ಜಿ.ಎಲ್.ಪಿ.ಶಾಲೆ ಕುಂಜತ್ತೂರಿನಲ್ಲಿ ನಡೆದ ಪಿ.ಯಿ.ಸಿ. ಮಟ್ಟದ ಸಾಹಿತ್ಯೋತ್ಸವದಲ್ಲಿ ನಮ್ಮ ಶಾಲೆಯ ಏಳು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. ಕಥಾ ರಚನೆಯಲ್ಲಿ ಪ್ರಣಮ್ಯ
,
ಜನಪದಗೀತೆಯಲ್ಲಿ ಜಲಧಿ
,
ಚಿತ್ರರಚನೆಯಲ್ಲಿ ಅಭಿನ್ ಉಪಜಿಲ್ಲಾ ಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾದರು.
19-01-2016
ಮಂಗಳವಾರದಂದು ಪೈವಳಿಕೆ ನಗರ ಶಾಲೆಯಲ್ಲಿ ನಡೆದ ಉಪಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ಮೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಥಾರಚನೆಯಲ್ಲಿ ಪ್ರಣಮ್ಯ ಮತ್ತು ಜನಪದ ಗೀತೆ ಸ್ಪರ್ಧೆಯಲ್ಲಿ ಜಲಧಿ ಎಸ್. ರಾವ್ ಪ್ರಥಮ ಸ್ಥಾನವನ್ನು ಪಡೆದಿರುವರು.
Newer Posts
Older Posts
Home
Subscribe to:
Posts (Atom)
ಗಣರಾಜ್ಯೋತ್ಸವ
Dasara Celebration
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆ
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...
ಗಣರಾಜ್ಯೋತ್ಸವ