ನಾಲ್ಕನೆಯ ತರಗತಿಯ ಮಕ್ಕಳಿಗೆ ಶಾಲಾ ಪ್ರವಾಸ ಏರ್ಪಡಿಸಿಲಾಯಿತು. 59 ಮಕ್ಕಳು ಹಾಗೂ 7 ಅಧ್ಯಾಪಕರು ಒಟ್ಟಾಗಿ 9 ಗಂಟೆಗೆ ಶಾಲೆಯಿಂದ ಹೊರಟು ಮಂಗಳೂರಿಗೆ ಬಂದೆವು. ಬೆಳಗ್ಗೆ ಕದ್ರಿ ಪಾರ್ಕ್ ನಲ್ಲಿ ಉಪಹಾರ ಮುಗಿಸಿದೆವು. ಅಲ್ಲಿಂದ ಬಿಜೈನಲ್ಲಿರುವ ಪುರಾತನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಅಲ್ಲಿರುವ ಪುರಾತನ ವಸ್ತುಗಳನ್ನು ಮಕ್ಕಳು ಆಸಕ್ತಿಯಿಂದ ವೀಕ್ಷಿಸಿದರು. ನಂತರ ಎಯ್ಯಾಡಿಯಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದೆವು. ಹೊಸದಿಗಂತ ಪ್ರೆಸ್, ಪ್ಲಾಸ್ಟಿಕ್ ವಸ್ತುಗಳ ತಯಾರಿ, ಕಬ್ಬಿಣದ ಡಬ್ಬ ತಯಾರಿ ಮತ್ತು ಆಹಾರ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಸಂದರ್ಶಿಸಿದೆವು. ಅಲ್ಲಿನ ಕೆಲಸ ಕಾರ್ಯಗಳ ವಿಧಾನವನ್ನು ತಿಳಿದುಕೊಂಡರು. ಮಧ್ಯಾಹ್ನದ ಊಟವನ್ನು ಅಲ್ಲೇ ಸಮೀಪದ ಸಭಾಂಗಣದಲ್ಲಿ ಪೂರೈಸಲಾಯಿತು. ಅಲ್ಲಿಂದ ಪಿಲಿಕುಳ ಮೃಗಾಲಯವನ್ನು ಸಂದರ್ಶಿಸಿದೆವು. ಅಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಉರಗಗಳನ್ನು ವೀಕ್ಷಿಸಿದೆವು. ಬಳಿಕ ಪಿಲಿಕುಳ ಕಲಾ ಗ್ರಾಮಕ್ಕೆ ಭೇಟಿ ನೀಡಿದೆವು. ಅಲ್ಲಿ ಮಡಿಕೆ ತಯಾರಿ, ಅವಲಕ್ಕಿ ತಯಾರಿ, ಎತ್ತಿನ ಗಾಣ, ಕಬ್ಬಿಣ ಕೆಲಸ, ಕೈ ಮಗ್ಗ ಮತ್ತು ಬೆತ್ತದ ಪಿಠೋಪಕರಣಗಳ ತಯಾರಿ ಇತ್ಯಾದಿಗಳನ್ನು ವೀಕ್ಷಿಸಿದೆವು. ನಂತರ 4 ಗಂಟೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ತಲಪಿದೆವು. ಅಲ್ಲಿ ಅನೇಕ ವಿಜ್ಞಾನದ ಕೌತುಕಗಳು, ವಸ್ತುಗಳು ಮತ್ತು 3ಡಿ ಪ್ರದರ್ಶನವನ್ನು ವೀಕ್ಷಿಸಿದೆವು. 5.30 ಕ್ಕೆ ಸರಿಯಾಗಿ ಊರಿಗೆ ಹೊರಟೆವು. ಒಟ್ಟಿನಲ್ಲಿ ಪ್ರವಾಸ ಮಕ್ಕಳಿಗೂ, ಅಧ್ಯಾಪಕರಿಗೂ ಉತ್ತಮ ಅನುಭವಗಳನ್ನು ನೀಡಿತು.
Wednesday, 18 February 2015
ಶೈಕ್ಷಣಿಕ ಪ್ರವಾಸ
ನಾಲ್ಕನೆಯ ತರಗತಿಯ ಮಕ್ಕಳಿಗೆ ಶಾಲಾ ಪ್ರವಾಸ ಏರ್ಪಡಿಸಿಲಾಯಿತು. 59 ಮಕ್ಕಳು ಹಾಗೂ 7 ಅಧ್ಯಾಪಕರು ಒಟ್ಟಾಗಿ 9 ಗಂಟೆಗೆ ಶಾಲೆಯಿಂದ ಹೊರಟು ಮಂಗಳೂರಿಗೆ ಬಂದೆವು. ಬೆಳಗ್ಗೆ ಕದ್ರಿ ಪಾರ್ಕ್ ನಲ್ಲಿ ಉಪಹಾರ ಮುಗಿಸಿದೆವು. ಅಲ್ಲಿಂದ ಬಿಜೈನಲ್ಲಿರುವ ಪುರಾತನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಅಲ್ಲಿರುವ ಪುರಾತನ ವಸ್ತುಗಳನ್ನು ಮಕ್ಕಳು ಆಸಕ್ತಿಯಿಂದ ವೀಕ್ಷಿಸಿದರು. ನಂತರ ಎಯ್ಯಾಡಿಯಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದೆವು. ಹೊಸದಿಗಂತ ಪ್ರೆಸ್, ಪ್ಲಾಸ್ಟಿಕ್ ವಸ್ತುಗಳ ತಯಾರಿ, ಕಬ್ಬಿಣದ ಡಬ್ಬ ತಯಾರಿ ಮತ್ತು ಆಹಾರ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಸಂದರ್ಶಿಸಿದೆವು. ಅಲ್ಲಿನ ಕೆಲಸ ಕಾರ್ಯಗಳ ವಿಧಾನವನ್ನು ತಿಳಿದುಕೊಂಡರು. ಮಧ್ಯಾಹ್ನದ ಊಟವನ್ನು ಅಲ್ಲೇ ಸಮೀಪದ ಸಭಾಂಗಣದಲ್ಲಿ ಪೂರೈಸಲಾಯಿತು. ಅಲ್ಲಿಂದ ಪಿಲಿಕುಳ ಮೃಗಾಲಯವನ್ನು ಸಂದರ್ಶಿಸಿದೆವು. ಅಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಉರಗಗಳನ್ನು ವೀಕ್ಷಿಸಿದೆವು. ಬಳಿಕ ಪಿಲಿಕುಳ ಕಲಾ ಗ್ರಾಮಕ್ಕೆ ಭೇಟಿ ನೀಡಿದೆವು. ಅಲ್ಲಿ ಮಡಿಕೆ ತಯಾರಿ, ಅವಲಕ್ಕಿ ತಯಾರಿ, ಎತ್ತಿನ ಗಾಣ, ಕಬ್ಬಿಣ ಕೆಲಸ, ಕೈ ಮಗ್ಗ ಮತ್ತು ಬೆತ್ತದ ಪಿಠೋಪಕರಣಗಳ ತಯಾರಿ ಇತ್ಯಾದಿಗಳನ್ನು ವೀಕ್ಷಿಸಿದೆವು. ನಂತರ 4 ಗಂಟೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ತಲಪಿದೆವು. ಅಲ್ಲಿ ಅನೇಕ ವಿಜ್ಞಾನದ ಕೌತುಕಗಳು, ವಸ್ತುಗಳು ಮತ್ತು 3ಡಿ ಪ್ರದರ್ಶನವನ್ನು ವೀಕ್ಷಿಸಿದೆವು. 5.30 ಕ್ಕೆ ಸರಿಯಾಗಿ ಊರಿಗೆ ಹೊರಟೆವು. ಒಟ್ಟಿನಲ್ಲಿ ಪ್ರವಾಸ ಮಕ್ಕಳಿಗೂ, ಅಧ್ಯಾಪಕರಿಗೂ ಉತ್ತಮ ಅನುಭವಗಳನ್ನು ನೀಡಿತು.
Subscribe to:
Post Comments (Atom)
-
ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಸ್ಪರ್ಧಿಸಿದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿ ಪ್ರಥ್ವಿನ್ ಪ್ರಭು 100 ಮೀಟರ್ ಓ...
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...
No comments:
Post a Comment